ಒಂದು ಸಣ್ಣ ಸಹಾಯ
ಸತೀಶ ದಾರಿ ಕ್ರಾಸ್ ಮಾಡಿ
ಬರುತ್ತಿದ್ದಾಗ ಅವನ ಸ್ವಲ್ಪ ಮುಂದೆ ಹೋಗ್ತಾ ಇದ್ದ
ಹುಡುಗ ಒಬ್ಬ,
ಟ್ರಿಪ್ ಆಗಿ, ಮುಗ್ಗರಿಸಿ ಬಿದ್ದ.
ನಾಲ್ಕು ಪುಸ್ತಕ, ಐದಾರು ಪಟ್ಟಿ, ಪೆನ್ನು
ಕ್ರಿಕೆಟ್ ಬಾಲು, ಪೇಸ್ಟ್, ಒಂದು
ಚಿಕ್ಕ ಟೇಪ್ರಿಕಾರ್ಡರ್, ಒ0ದು ಸ್ವೆಟರ್-
ಎಲ್ಲಾ ರಸ್ತೆಯ ಮೇಲಿತ್ತು
ಸತೀಶ, ಬಗ್ಗಿ ಒಂದೊಂದೇ ತೆಗೆದುಕೊಟ್ಟ.
ಅಂದ್ಹಾಗೆ ಇಬ್ಬರು ಒಂದೇ ಕಡೆಗೆ ಹೋಗ್ತಾ
ಇರೋದ್ರಿಂದ, ಸತೀಶ ಸ್ವಲ್ಪ ಸಾಮಾನು
ಎತ್ತಿಕೊಂಡ. ಮಾತು ಮಾತಿನಲ್ಲಿ
ಆ ಹುಡುಗನ ಹೆಸರು ಕಾರ್ತೀಕ ಅಂತ ತಿಳೀತು.
ಕಾರ್ತಿಕನ ಮನೆಗೆ ಇಬ್ಬರೂ ಹೋದರು
ಸ್ವಲ್ಪ ನಗೆಯಾಡಿದರು, ಪೆಪ್ಸಿ ಕುಡಿದರು,
ಟಿವಿಯಲ್ಲಿ ಕಾರ್ಟೂನ್ ನೋಡಿದರು,-
ಹೀಗೇ ಸತೀಶ ಮನೆಗೆ ಹೋಗುವಷ್ಟರಲ್ಲಿ
ಸುಮಾರು ಸಮಯ ಆಗಿತ್ತು.
ಸ್ಕೂಲಿಂದ ಬರುವಾಗ ಒಂದೆರಡು ಬಾರಿ ಸಿಕ್ಕಿ
ಮಾತಾಡಿದರು ಕೆಲವು ಬಾರಿ.
ಪಾರ್ಕ್ನಲ್ಲಿ ಕ್ರಿಕೆಟ್ ಆಟ ಆಡಿದರು. ಅಲ್ಲಲ್ಲಿ ಸಿಕ್ತಾ ಇದ್ರು.
ಒಂದೈದು ವರ್ಷದ ನಂತರ ಆಕಸ್ಮಿಕವಾಗಿ ಸಿಕ್ಕು
ಒಂದು ಶನಿವಾರ,
ದಾರೀ ಬದಿ ಸ್ಟಾಲ್ನಲ್ಲಿ ಮಸಾಲೆ ದೋಸೆ ತಿಂದರು.
ಎಸ್.ಎಸ್.ಎಲ್.ಸಿ ಮುಗಿಯುತ್ತಲೇ, ಕಾರ್ತಿಕ್
ಒಂದು ಪ್ಯಾಕ್ಟರಿಯಲ್ಲಿ ಸೇರಿಕೊಂಡ.
ಇದಾದ ಮೂರು ತಿಂಗಳಿಗೆ, ಅವನಿಗೆ
ಸತೀಶ, ಕಿರಣಿ ಅಂಗಡಿಯಲ್ಲಿ ಸಿಕ್ಕ.
ಕಾರ್ತಿಕ ಏನೋ ಮಾತನ್ನಾಡಬೇಕಂತ ಹೇಳಿದ್ದರಿಂದ
ಇಬ್ಬರೂ ಒಂದು ಬೆಂಚ್ ಮೇಲೆ
ಕುಳಿತು ಮಾತಾಡತೊಡಗಿದರು.
"ಸುಮಾರು ವರ್ಷದ ಹಿಂದೆ,
ನಾನು ದಾರಿ ಬದಿಗೆ ಬಿದ್ದಿದ್ದು ನೆನಪಿದೆಯಾ?
ಕಾರ್ತಿಕ್ ಕೇಳಿದ.
"ನಾನೆ ಯಾಕೆ ಹೋಗ್ತಾ ಇದ್ದಿರಬಹುದು
ಅಂತ ನಿನಗೆ ಯಾವಾಗಾದ್ರೂ
ಅನ್ನಿಸಿದೆಯಾ?"
ಅವೊತ್ತು ಸರ್ಕಾರಿ ಆಸ್ಪತ್ರೆಯಲ್ಲಿ
ನನ್ನಮ್ಮ ತೀರಿಕೊಂಡರು.
ಇರೋ ಸಾಮಾನು ನನ್ನ ಸ್ಕೂಲ್ ಬ್ಯಾಗಿನಲ್ಲಿ ತುಂಬಿ
ಬರುತ್ತ ಇದ್ದೆ, ಇರೋ ಒಬ್ಬ ಸಂಬಂಧಿ
ಅಮ್ಮ ಸತ್ತು ಕಣ್ಣೀರು ಬಂತು.
ಅವತ್ತು ರಾತ್ರಿ ವಿಷ ತಗೊಂಡು
ಸಾಯೋದು, ಅಂತ ಪ್ಲಾನ್ ಮಾಡಿದ್ದೆ.
ನಿಮ್ಮ ಜೊತೆ ನಕ್ಕಿದ್ದು, ಮಾತಾಡಿದ್ದಾಯ್ತು
ಸ್ವಲ್ಪ ಹಗೂರೆನಿಸಿತು.
ಈ ಜಗತ್ತಿನಲ್ಲಿ ಒಳ್ಳೆಯವರಿದ್ದಾರೆ.
ಗೆಳೆಯರಾಗುತ್ತಾರೆ, ದಿನ ಚನ್ನಾಗಿ
ಆಗಬಹುದು, ಅನ್ನಿಸಿತು.
ನೋಡು ಸತೀಶಾ, ನೀನವತ್ತು
ಬರೀ ಸಹಾಯವಷ್ಟೇ ಅಲ್ಲ ಮಾಡಿದ್ದು
ನನ್ನ ಜೀವವನ್ನು ಉಳಿಸಿದೆ.
ಶೇಷಗಿರಿ ಹೆಗಡೆ.