Our book with Wiley on AI

Thanks, Nisha. Thanks for your kind words. I learned a lot from you, Wil and Michael. I enjoyed being your editor! I benefited greatly from ...

Showing posts with label ಕನ್ನಡ. Show all posts
Showing posts with label ಕನ್ನಡ. Show all posts

Tuesday, January 5, 2016

ದಾನ - ಖಲಿಲ್ ಗಿಬ್ರಾನ್

ಕೆಲವರು ಎಷ್ಟೇ ಇದ್ದರೂ ಒಂದಿಷ್ಟೇ ಕೊಡುತ್ತಾರೆ,
ಅವರು ಮಾಡುವುದು ಕೀರ್ತಿಗೋಸ್ಕರ,
ಅವರ ಅಡಗಿದ ಈ ಆಸೆ
ಅವರ ದಾನವನ್ನು ಕುರೂಪಿಯಾಗಿಸುತ್ತದೆ.
ಮತ್ತೆ ಕೆಲವರಿದ್ದಾರೆ; ಅವರಿಗಿರುವುದೇ ಒಂದಿಷ್ಟು
ಅಷ್ಟೂ ದಾನ ಮಾಡುತ್ತಾರೆ.
ಅವರಿಗೆ ಜೀವನದಲ್ಲಿ ನಂಬಿಕೆ ಇದೆ.
ಅವರ ಖಜಾನೆ ಯಾವತ್ತೂ ಬರಿದಾಗುವುದಿಲ್ಲ.
ಹೀಗೆ ಕೆಲವರು, ಸಂತೋಷದಿಂದ ಕೊಡುತ್ತಾರೆ.
ಸಂತೋಷ, ಅವರ ಬಹುಮಾನ;
ಮತ್ತೆ ಕೆಲವರು ತುಂಬಾ ದುಃಖದಿಂದ ಕೊಡುತ್ತಾರೆ.
ದುಃಖ, ಅವರ ಶಿಕ್ಷೆ.
ಮತ್ತೆ ಕೆಲವರು ಕೊಡುತ್ತಾರೆ, ಅವರಿಗೆ
ದುಃಖ ಗೊತ್ತಿಲ್ಲ; ಸಂತೋಷ ಅವರು ಹುಡುಕುತ್ತಾ ಇಲ್ಲ.
ಪುಣ್ಯಪ್ರಜ್ಞೆಯಿಲ್ಲ ಅವರಲ್ಲಿ;
ಸಂಪಿಗೆ ಕಂಪು, ಆಕಾಶದಲ್ಲಿ ಹರಡಿದಂತೆ.
ಅವರು ದಾನ ಕೊಡುತ್ತಾರೆ.
ಅವರ ಕೈಗಳಿಂದ ದೇವರು ಮಾತನ್ನಾಡುತ್ತಾನೆ
ಮತ್ತು, ಅವರ ಕಂಗಳಿಂದ
ದೇವರು ನಗುತ್ತಾನೆ.
ಕೇಳಿದಾಗ ಕೊಡುವುದು, ಉತ್ತಮ.
ಆದರೆ ಕೇಳದಲೆ,
ತಿಳಿದು ಕೊಡುವುದು ಇನ್ನೂ ಉತ್ತಮ.
ಇ0ತಹ ದಾನಿಗಳಿಗೆ, ದಾನ ತೆಗೆದುಕೊಳ್ಳುವವರನ್ನು
ಹುಡುಕುವುದು, ದಾನ ಕೊಡುವುದಕ್ಕಿಂತಲೂ
ತುಂಬಾ ಹರುಷ.
ಹೀಗೆ ಕೊಡಲೇಬಾರದು ಅಂತೇನಾದರೂ ಇದೆಯಾ?
ಒಂದಲ್ಲಾ ಒಂದು ದಿನ
ನಮ್ಮಲ್ಲಿರುವುದೆಲ್ಲಾ ಕೊಟ್ಟು ಹೋಗುತ್ತದೆ.
ಹಾಗಾಗಿ, ಈಗಲೇ ಕೊಡು, ಕೊಡುವ ಕಾಲ ನಿನ್ನದು
ಬಹುಶಃ ನಿಮ್ಮ ಮುಂದಿನ ಪೀಳಿಗೆಯದಲ್ಲ.
ಪದೇ ಪದೇ ನೀವು ಹೇಳುತ್ತೀರಿ;
"ನಾನು ಕೊಡುತ್ತೇನೆ ಆದರೆ ಯಾರಿಗೆ ಅದರ
ಅವಶ್ಯಕತೆ ಇದೆಯೋ ಅವರಿಗೆ ಮಾತ್ರ."
ನಿಮ್ಮ ಕೊಪ್ಪಲಲ್ಲಿರುವ ಹಣ್ಣಿನ ಮರ
ಹಾಗೆ ಹೇಳುವುದಿಲ್ಲ, ಅಥವಾ ಬೇಣದಲ್ಲಿ ಮೆಯುತ್ತಿರುವ
ನಿಮ್ಮ ಆಕಳು ಹಾಗೆ ಹೇಳುವುದಿಲ್ಲ.
ಬದುಕಲು ಕೊಡುತ್ತಾರೆ ಅವರು ಏಕೆಂದರೆ,
ಕೊಡದೇ ಇರುವುದು, ನಿಮ್ಮ ನಾಶಕ್ಕೆ.
ಯಾರು ಹಗಲಿಗೂ ಇರುಳಿಗೂ ಯೋಗ್ಯನೋ
ಅವನು ನಿಮ್ಮ ಎಲ್ಲ ದಾನಗಳಿಗೂ
ಯೋಗ್ಯ, ಅದು ನಿಜ.
ಮತ್ತೆ ಯಾರು ಜೀವನ ಸಮುದ್ರವನ್ನು
ಕುಡಿಯಲು ಯೋಗ್ಯರೋ ಅವರು
ನಿಮ್ಮ ಹಳ್ಳದಿ0ದ ಅವರ
ಪಾತ್ರೆ ತುಂಬಿಸಿಕೊಳ್ಳಲೂ ಯೋಗ್ಯರು.
ಇನ್ನೊಬ್ಬರಿಂದ ದಾನ ತೆಗೆದುಕೊಳ್ಳುವುದಕ್ಕಿಂತಲೂ
ದೊಡ್ಡದಾದ ಬರ ಯಾವುದಿದೆ?
ನೀವು ಯಾರು ಅಂತ
ಅವರ ಹೃದಯ ಕಿತ್ತು,
ಅವರ ಅಭಿಮಾನ ನಿಮ್ಮೆದುರಿಗೆ ಇಟ್ಟು
ನಾಚಿಕೆ ಬಿಟ್ಟು ಅವರ ನಗ್ನ ಮಾನ
ನಿಮ್ಮೆದುರಿಗಿಡಬೇಕು?
ಅದಕ್ಕೂ ಮೊದಲು ದಾನ
ಕೊಡಲು ನೀವು ಯೋಗ್ಯರಾ, ಒಳ್ಳೆ ದಾನಿಯೇ ನೀವು?
ಅದನ್ನು ನೋಡಿಕೊಳ್ಳಿ.
ಏಕೆಂದರೆ, ಇಲ್ಲಿ ನಿಜ ಏನೆಂದರೆ,
ಒಂದು ಜೀವ ಇನ್ನೊಂದು ಜೀವಕ್ಕೆ
ಕೊಡುತ್ತಿದೆ.
ದಾನಿ ಅಂತ ನೀವು ತಿಳಿದಿದ್ದೀರಿ
ಆದರೆ, ಸತ್ಯದಲ್ಲಿ ನೀವು ಸಾಕ್ಷಿ ಮಾತ್ರ.

Tuesday, December 8, 2015

ಕನ್ನಡ ಚುಟುಕು ಕವಿತೆಗಳು - ಜಿ ವಿ ಹೆಗಡೆ




ಹಾಡು – ರಾಗ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಮಳೆಬಂತು ಕೊಡೆ ಇಲ್ಲ
ಕಡಲೆ ಉಂಟು ಹಲ್ಲಿಲ್ಲ
ಹಾಡುವದು ಗೊತ್ತು ರಾಗ ತಿಳಿದಿಲ್ಲ

ಮರೆವು – ಮಾರಿ (ಕವನ)
ಮರೆವು ಮಾರಿ
ನೆನಪು ಸಿರಿ
ಕಠೋರ ಮಾತು ಬಿಸಿ ಎಣ್ಣೆ
ಮೃದುತ್ವ ಬೆಣ್ಣೆ
ಬೇವು ಕಹಿ
ಬೆಲ್ಲ ಸಿಹಿ
ಕವನ ತುಪ್ಪ
ಕಾವ್ಯ ಹೋಳಿಗೆ
ಸೂರ್ಯ ಚಂದ್ರ ನೆನಪು
ನಕ್ಷತ್ರ ಹೆಸರು ಮರೆವು
ಕುಳಿತಲ್ಲೆ ಮರೆವು
ನಿಂತಲ್ಲೇ ನೆನಪು

ಕಡಿಮೆ - ಹೆಚ್ಚು
ಮಾತು ಮರೆವು
ಕೆಲಸ ಕಡಿಮೆ
ಸಂಪ್ರದಾಯ ಬಿಡಲು
ಸಂಕಟ ಹೆಚ್ಚು

download here the whole book 


ಒಂದು ಸಣ್ಣ ಸಹಾಯ - ಶೇಷಗಿರಿ ಹೆಗಡೆ.


ಒಂದು ಸಣ್ಣ ಸಹಾಯ 

ಸತೀಶ ದಾರಿ ಕ್ರಾಸ್ ಮಾಡಿ
ಬರುತ್ತಿದ್ದಾಗ ಅವನ ಸ್ವಲ್ಪ ಮುಂದೆ ಹೋಗ್ತಾ ಇದ್ದ
ಹುಡುಗ ಒಬ್ಬ,
ಟ್ರಿಪ್ ಆಗಿ, ಮುಗ್ಗರಿಸಿ ಬಿದ್ದ.

ನಾಲ್ಕು ಪುಸ್ತಕ, ಐದಾರು ಪಟ್ಟಿ, ಪೆನ್ನು
ಕ್ರಿಕೆಟ್ ಬಾಲು, ಪೇಸ್ಟ್, ಒಂದು
ಚಿಕ್ಕ ಟೇಪ್‍ರಿಕಾರ್ಡರ್, ಒ0ದು ಸ್ವೆಟರ್-
ಎಲ್ಲಾ ರಸ್ತೆಯ ಮೇಲಿತ್ತು
ಸತೀಶ, ಬಗ್ಗಿ ಒಂದೊಂದೇ ತೆಗೆದುಕೊಟ್ಟ.

ಅಂದ್ಹಾಗೆ ಇಬ್ಬರು ಒಂದೇ ಕಡೆಗೆ ಹೋಗ್ತಾ
ಇರೋದ್ರಿಂದ, ಸತೀಶ ಸ್ವಲ್ಪ ಸಾಮಾನು
ಎತ್ತಿಕೊಂಡ. ಮಾತು ಮಾತಿನಲ್ಲಿ
ಆ ಹುಡುಗನ ಹೆಸರು ಕಾರ್ತೀಕ ಅಂತ ತಿಳೀತು.

ಕಾರ್ತಿಕನ ಮನೆಗೆ ಇಬ್ಬರೂ ಹೋದರು
ಸ್ವಲ್ಪ ನಗೆಯಾಡಿದರು, ಪೆಪ್ಸಿ ಕುಡಿದರು,
ಟಿವಿಯಲ್ಲಿ ಕಾರ್ಟೂನ್ ನೋಡಿದರು,-
ಹೀಗೇ ಸತೀಶ ಮನೆಗೆ ಹೋಗುವಷ್ಟರಲ್ಲಿ
ಸುಮಾರು ಸಮಯ ಆಗಿತ್ತು.

ಸ್ಕೂಲಿಂದ ಬರುವಾಗ ಒಂದೆರಡು ಬಾರಿ ಸಿಕ್ಕಿ
ಮಾತಾಡಿದರು ಕೆಲವು ಬಾರಿ.

ಪಾರ್ಕ್‍ನಲ್ಲಿ ಕ್ರಿಕೆಟ್ ಆಟ ಆಡಿದರು. ಅಲ್ಲಲ್ಲಿ ಸಿಕ್ತಾ ಇದ್ರು.
ಒಂದೈದು ವರ್ಷದ ನಂತರ ಆಕಸ್ಮಿಕವಾಗಿ ಸಿಕ್ಕು
ಒಂದು ಶನಿವಾರ,
ದಾರೀ ಬದಿ ಸ್ಟಾಲ್‍ನಲ್ಲಿ ಮಸಾಲೆ ದೋಸೆ ತಿಂದರು.

ಎಸ್.ಎಸ್.ಎಲ್.ಸಿ ಮುಗಿಯುತ್ತಲೇ, ಕಾರ್ತಿಕ್
ಒಂದು ಪ್ಯಾಕ್ಟರಿಯಲ್ಲಿ ಸೇರಿಕೊಂಡ.
ಇದಾದ ಮೂರು ತಿಂಗಳಿಗೆ, ಅವನಿಗೆ
ಸತೀಶ, ಕಿರಣಿ ಅಂಗಡಿಯಲ್ಲಿ ಸಿಕ್ಕ.

ಕಾರ್ತಿಕ ಏನೋ ಮಾತನ್ನಾಡಬೇಕಂತ ಹೇಳಿದ್ದರಿಂದ
ಇಬ್ಬರೂ ಒಂದು ಬೆಂಚ್ ಮೇಲೆ
ಕುಳಿತು ಮಾತಾಡತೊಡಗಿದರು.

"ಸುಮಾರು ವರ್ಷದ ಹಿಂದೆ,
ನಾನು ದಾರಿ ಬದಿಗೆ ಬಿದ್ದಿದ್ದು ನೆನಪಿದೆಯಾ?
ಕಾರ್ತಿಕ್ ಕೇಳಿದ.
"ನಾನೆ ಯಾಕೆ ಹೋಗ್ತಾ ಇದ್ದಿರಬಹುದು
ಅಂತ ನಿನಗೆ ಯಾವಾಗಾದ್ರೂ
ಅನ್ನಿಸಿದೆಯಾ?"

ಅವೊತ್ತು ಸರ್ಕಾರಿ ಆಸ್ಪತ್ರೆಯಲ್ಲಿ
ನನ್ನಮ್ಮ ತೀರಿಕೊಂಡರು.

ಇರೋ ಸಾಮಾನು ನನ್ನ ಸ್ಕೂಲ್ ಬ್ಯಾಗಿನಲ್ಲಿ ತುಂಬಿ
ಬರುತ್ತ ಇದ್ದೆ, ಇರೋ ಒಬ್ಬ ಸಂಬಂಧಿ
ಅಮ್ಮ ಸತ್ತು ಕಣ್ಣೀರು ಬಂತು.
ಅವತ್ತು ರಾತ್ರಿ ವಿಷ ತಗೊಂಡು
ಸಾಯೋದು, ಅಂತ ಪ್ಲಾನ್ ಮಾಡಿದ್ದೆ.

ನಿಮ್ಮ ಜೊತೆ ನಕ್ಕಿದ್ದು, ಮಾತಾಡಿದ್ದಾಯ್ತು
ಸ್ವಲ್ಪ ಹಗೂರೆನಿಸಿತು.
ಈ ಜಗತ್ತಿನಲ್ಲಿ ಒಳ್ಳೆಯವರಿದ್ದಾರೆ.
ಗೆಳೆಯರಾಗುತ್ತಾರೆ, ದಿನ ಚನ್ನಾಗಿ
ಆಗಬಹುದು, ಅನ್ನಿಸಿತು.

ನೋಡು ಸತೀಶಾ, ನೀನವತ್ತು
ಬರೀ ಸಹಾಯವಷ್ಟೇ ಅಲ್ಲ ಮಾಡಿದ್ದು
ನನ್ನ ಜೀವವನ್ನು ಉಳಿಸಿದೆ.
  
ಶೇಷಗಿರಿ ಹೆಗಡೆ.


Saturday, November 14, 2015

ಅಪರಾಧ ಎಸಗುವವನು ನಿಮ್ಮವನಲ್ಲ


Khalil Gibran Poem - The Prophet

ಬಹಳ ಬಾರಿ ನೀವು ಹೇಳುವುದನ್ನು ಕೇಳಿದ್ದೇನೆ
ಅಪರಾಧ ಎಸಗುವವನು ನಿಮ್ಮವನಲ್ಲ,
ನಿಮಗೆ ಅಪರಿಚಿತ, ಮತ್ತು
ಪ್ರಪಂಚದಲ್ಲಿ ಒಳನುಗ್ಗುವ ನಿಮ್ಮ ಶತ್ರು.
ಆದರೆ ನಾನು ಹೇಳುತ್ತೇನೆ,
ಹೇಗೆ ಧಾರ್ಮಿಕತೆ ಮತ್ತು ಪವಿತ್ರತೆ
ನಿಮ್ಮ ಪ್ರತಿ ಒಬ್ಬರಲ್ಲಿರುವದಕ್ಕಿ0ತ ಹೆಚ್ಚು
ಎತ್ತರಕ್ಕೆ ಏರಲಾರದೋ, ಹಾಗೇ,
ದುಷ್ಟ ಮತ್ತು ಅಶಕ್ತ,
ಕನಿಷ್ಠ ಕೀಳುಮಟ್ಟಕ್ಕಿಂತ ಕೆಳಗೆ,
ಯಾವ ಕೀಳು ನಿಮ್ಮಲ್ಲಿಯೂ ಇದೆಯೋ - ಅದಕ್ಕಿಂತ
ಕೆಳಗೆ ಹೋಗಲಾರ.
ಹೇಗೆ, ಒಂದು ಎಲೆಯೂ,
ಸಂಪೂರ್ಣ ಮರದ ಮೌನ ಸಮ್ಮತಿಯಿಲ್ಲದೆ
ಹಳದಿಯಾಗಲಾರದೋ, ಹಾಗೆ,
ನಿಮ್ಮೆಲ್ಲರ ಗುಪ್ತ ಸಮ್ಮತಿಯಿಲ್ಲದೆ
ಅಪರಾಧಿ ತಪ್ಪು ಮಾಡಲಾರ.
ಮೆರವಣಿಗೆ ಒಂದು ಹೋದಂತೆ ನೀವು
ನಿಮ್ಮ ಆತ್ಮದ ಕಡೆ ಸಾಗುತ್ತಿದ್ದೀರಿ.
ನೀವು ದಾರಿಯೂ ಹೌದು, ದಾರಿ ಮಾಡುವವರೂ ಹೌದು.
ನಿಮ್ಮಲ್ಲಿ ಒಬ್ಬ ಕೆಳಗೆ ಬಿದ್ದಾಗ,
ಹಿಂದಿರುವ ಎಲ್ಲರ ಸಲುವಾಗಿ
ಬೀಳುತ್ತಾನೆ ಅವನು;
ಮೂಕರಿಸಿ ಬೀಳುವ ಸೂಚಕ ಅವನು.
ಅಯ್ಯೋ, ಅವನು ಅವನ ಮುಂದಿರುವವರ
ಸಲುವಾಗಿಯೂ ಬೀಳುತ್ತಾನೆ,
ದೃಢ ಹೆಜ್ಜೆಯ ಅವರು, ವೇಗವಾಗಿ
ಚಲಿಸುವವರಾದರೂ, ಮುಗ್ಗರಿಸಿದ
ಕಲ್ಲನ್ನು ತೆಗೆಯಲಿಲ್ಲವಲ್ಲ, ಹಾಗಾಗಿ.
ಕೊಲೆಯಾದವ ಅವನ ಕೊಲೆಗೆ
ಪೂರ್ಣ ಅ-ಜವಾಬ್ದಾರನಲ್ಲದೆ ಇಲ್ಲ.
ಕಳೆದುಕೊಂಡವ ಆ ಕಳ್ಳತನಕ್ಕೆ
ಪೂರ್ಣ ನಿರ್ದೋಶಕನಲ್ಲ

Thursday, November 12, 2015

ಒಬ್ಬಳು ಸುಂದರಿ ಮತ್ತು ಒಬ್ಬಳು ಕುರೂಪಿ

ಹೀಗೊಂದು ದಿನ ಸಮುದ್ರದ ತೀರದ ಮೇಲೆ ಒಬ್ಬಳು ಸುಂದರಿ ಮತ್ತು ಒಬ್ಬಳು ಕುರೂಪಿ ಮೀಟ್ ಆದರು.
ಸಂತೋಷದಲ್ಲಿ  "ನಾವು ಸಮುದ್ರದಲ್ಲಿ ಈಜಾಡೋಣ" ಅಂತ ಒಬ್ರಿಗೊಬ್ರು ಅಂದುಕೊಂಡರು.
ಸ್ವಲ್ಪ ಸಮಯ ಇಬ್ಬರೂ ಸಮುದ್ರದಲ್ಲಿ ಈಜಾಡಿದರು. ಮೊದಲು ಕುರೂಪಿ ಯುವತಿ ಸಾಕಾಗಿ ಮೇಲೆ ಬಂದವಳು, ಸುಂದರಿ ಯುವತಿಯ ಬಟ್ಟೆ ಹಾಕಿಕೊಂಡು ಹೊರಟು ಹೋದಳು. ಸ್ವಲ್ಪದರಲ್ಲೇ, ಸುಂದರ ಯುವತಿಯೂ ಸಾಕಾಗಿ ಬಂದಳು . ಅವಳ ಬಟ್ಟೆ ಮಾಯವಾಗಿತ್ತು. ಮನಸ್ಸಿಲ್ಲದಿದ್ದರೂ, ಬೇರೆ ದಾರಿಇಲ್ಲದ್ದರಿಂದ ಉಳಿದ ಕುರೂಪಿ ಬಟ್ಟೆಯನ್ನೇ ಹಾಕಿಕೊಂಡು ಅವಳೂ ಹೊರಟು ಹೋದಳು.
ಅದಕ್ಕಾಗಿ ಇವತ್ತಿನವರೆಗೂ, ಎಲ್ಲರೂ ಸುಂದರಿಯನ್ನು ಕುರೂಪಿಯೆಂದೂ, ಕುರೂಪಿಯನ್ನು ಸುಂದರಿಯೆಂದೂ ತಿಳಿಯುತ್ತಾರೆ.
ಸುಂದರಿ ಯುವತಿಯ ಮುಖವನ್ನು ನೋಡಿದ ಕೆಲವರು ಅವಳನ್ನು ಸರಿಯಾಗಿ ಗುರುತಿಸುತ್ತಾರೆ. ಹಾಗೆ ಕುರುಪಿಯ ಮುಖ ನೋಡಿದವರು ಅವಳನ್ನು ಗುರುತಿಸುವಲ್ಲಿ ಮೋಸ ಹೋಗುವದಿಲ್ಲ.

ಮಹಾ ಸಂತ ಕಾಲಿಲ್ ಗಿಬ್ರಾನ್.